e-varadi ಲೊಗೊ
Home
ಮುಖಪುಟ
ಪಾಲಿಟಿಕ್ಸ್
ಬಿಸಿನೆಸ್
ಸಿನಿಮಾ
ಅಪರಾಧ
ಅಂಕಣ/ಸಂದರ್ಶನ
e-varadi ಲೊಗೊ
Home
ಮುಖಪುಟ
ಪಾಲಿಟಿಕ್ಸ್
ಬಿಸಿನೆಸ್
ಸಿನಿಮಾ
ಅಪರಾಧ
ಅಂಕಣ/ಸಂದರ್ಶನ
More
  • Home
  • ಮುಖಪುಟ
  • ಪಾಲಿಟಿಕ್ಸ್
  • ಬಿಸಿನೆಸ್
  • ಸಿನಿಮಾ
  • ಅಪರಾಧ
  • ಅಂಕಣ/ಸಂದರ್ಶನ

  • Home
  • ಮುಖಪುಟ
  • ಪಾಲಿಟಿಕ್ಸ್
  • ಬಿಸಿನೆಸ್
  • ಸಿನಿಮಾ
  • ಅಪರಾಧ
  • ಅಂಕಣ/ಸಂದರ್ಶನ

ಈ-ವರದಿ ವೆಬ್‌ಸೈಟ್‌ಗೆ ಸ್ವಾಗತ * ಪ್ಲೀಸ್ ಸದಸ್ಯತ್ವ ಪಡೆದುಕೊಳ್ಳಿ * ಜಾಹಿರಾತು ನೀಡಲು ಸಂಪರ್ಕಿಸಿ: 8150828888

ಈ-ವರದಿ ವೆಬ್‌ಸೈಟ್‌ಗೆ ಸ್ವಾಗತ * ಪ್ಲೀಸ್ ಸದಸ್ಯತ್ವ ಪಡೆದುಕೊಳ್ಳಿ * ಜಾಹಿರಾತು ನೀಡಲು ಸಂಪರ್ಕಿಸಿ: 8150828888

ಈ-ವರದಿ ವೆಬ್‌ಸೈಟ್‌ಗೆ ಸ್ವಾಗತ * ಪ್ಲೀಸ್ ಸದಸ್ಯತ್ವ ಪಡೆದುಕೊಳ್ಳಿ * ಜಾಹಿರಾತು ನೀಡಲು ಸಂಪರ್ಕಿಸಿ: 8150828888

ಈ-ವರದಿ ವೆಬ್‌ಸೈಟ್‌ಗೆ ಸ್ವಾಗತ * ಪ್ಲೀಸ್ ಸದಸ್ಯತ್ವ ಪಡೆದುಕೊಳ್ಳಿ * ಜಾಹಿರಾತು ನೀಡಲು ಸಂಪರ್ಕಿಸಿ: 8150828888

ಈ-ವರದಿ ವೆಬ್‌ಸೈಟ್‌ಗೆ ಸ್ವಾಗತ * ಪ್ಲೀಸ್ ಸದಸ್ಯತ್ವ ಪಡೆದುಕೊಳ್ಳಿ * ಜಾಹಿರಾತು ನೀಡಲು ಸಂಪರ್ಕಿಸಿ: 8150828888

ಈ-ವರದಿ ವೆಬ್‌ಸೈಟ್‌ಗೆ ಸ್ವಾಗತ * ಪ್ಲೀಸ್ ಸದಸ್ಯತ್ವ ಪಡೆದುಕೊಳ್ಳಿ * ಜಾಹಿರಾತು ನೀಡಲು ಸಂಪರ್ಕಿಸಿ: 8150828888

ಕೃಷಿ ಸಚಿವ ಚಲುವರಾಯ ಸ್ವಾಮಿಯವರ ಮನವಿಗೆ ಕೇಂದ್ರದ ಸಕಾರಾತ್ಮಕ ಸ್ಪಂದನೆ

ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭರವಸೆ

ಕರ್ನಾಟಕದ  ಸಾವಿರಾರು ರೈತರಿಗೆ ಪಿಎಂ-ಕಿಸಾನ್ ಯೋಜನೆಯಡಿ ಬಾಕಿ ಉಳಿದಿದ್ದ ಹಣವನ್ನು ಬಿಡುಗಡೆ ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಯವರು ಸಲ್ಲಿಸಿದ್ದ ಮನವಿಗೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಿದೆ. 

ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಡಿಸೆಂಬರ್ 17, 2025 ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು, ತಾಂತ್ರಿಕ ಕಾರಣಗಳಿಂದ ರಾಜ್ಯದ ಸುಮಾರು 30,000ಕ್ಕೂ ಹೆಚ್ಚು ಅರ್ಹ  ರೈತರು ಯೋಜನೆಯ ಲಾಭದಿಂದ ವಂಚಿತರಾಗುತ್ತಿರುವುದನ್ನು ಗಮನಕ್ಕೆ ತಂದಿದ್ದರು. ಕಳೆದ ವಾರ ನಡೆದ ಅಂತರರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಕೇಂದ್ರ ಸಚಿವರು ಆಗಮಿಸಿದ್ದ ಸಂದರ್ಭದಲ್ಲಿಯೂ  ಈ ವಿಚಾರವನ್ನು ಪ್ರಸ್ತಾಪಿಸಿ, ಮನವಿ ಮಾಡಿದ್ದರು. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯ ಸರ್ಕಾರ ನೀಡಿರುವ ದೃಢೀಕರಣದ ಆಧಾರದ ಮೇಲೆ ಈಗಾಗಲೇ 22,000ಕ್ಕೂ ಹೆಚ್ಚು ಫಲಾನುಭವಿಗಳನ್ನು 22ನೇ ಕಂತಿನ ಪಾವತಿ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಶೀಘ್ರದಲ್ಲೇ ಅವರಿಗೆ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಉಳಿದ ಪ್ರಕರಣಗಳನ್ನು ರಾಜ್ಯ ಅಧಿಕಾರಿಗಳು ಪರಿಶೀಲಿಸಿ ದೃಢೀಕರಿಸಿದ ಕೂಡಲೇ ಅವರನ್ನೂ ಯೋಜನೆಯಡಿ ಸೇರಿಸಿಕೊಳ್ಳಲಾಗುವುದು ಎಂದು ಚೌಹಾಣ್ ಅವರು ತಮ್ಮ ಪತ್ರದಲ್ಲಿ ಭರವಸೆ ನೀಡಿದ್ದಾರೆ.

​ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಸಚಿವ ಎನ್. ಚಲುವರಾಯಸ್ವಾಮಿ ಅವರು, "ರಾಜ್ಯದ ರೈತರ ಹಿತದೃಷ್ಟಿಯಿಂದ ನಾವು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ, ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ ರೈತರಿಗೆ ನ್ಯಾಯ ಒದಗಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರಾಜ್ಯ ಸರ್ಕಾರದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನುಅರ್ಪಿಸುತ್ತೇನೆ," ಎಂದು ತಿಳಿಸಿದ್ದಾರೆ. ಕೇಂದ್ರದ ಈ ಕ್ರಮದಿಂದಾಗಿ ಅರ್ಹ ರೈತರಿಗೆ ಸಮಯಕ್ಕೆ ಸರಿಯಾಗಿ ಆರ್ಥಿಕ ನೆರವು ಸಿಗುವಂತಾಗಿದ್ದು, ಬಾಕಿ ಇರುವ ಇತರ ರೈತರ ದಾಖಲೆಗಳ ಪರಿಶೀಲನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೃಷಿ ಸಚಿವ ಚಲುವರಾಯಸ್ವಾಮಿ

"ರಾಜ್ಯದ ರೈತರ ಹಿತದೃಷ್ಟಿಯಿಂದ ನಾವು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ, ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ ರೈತರಿಗೆ ನ್ಯಾಯ ಒದಗಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರಾಜ್ಯ ಸರ್ಕಾರದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನುಅರ್ಪಿಸುತ್ತೇನೆ,"

Subscribe

Copyright © 2026 media - All Rights Reserved.


Powered by

This website uses cookies.

We use cookies to analyze website traffic and optimize your website experience. By accepting our use of cookies, your data will be aggregated with all other user data.

Accept