
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾಗಿರುವ ಲೋಕನಾಯಕ ಲಿಂಗೈಕ್ಯ ಡಾ: ಭೀಮಣ್ಣ ಖಂಡ್ರೆಯವರ ನುಡಿ ನಮನ ಕಾರ್ಯಕ್ರಮ .
ಸನ್ಮಾನ್ಯ ಮುಖ್ಯಮಂತ್ರಿಯವರ ನುಡಿ ನಮನದ ನುಡಿಗಳು..
ಡಾ.ಭೀಮಣ್ಣ ಖಂಡ್ರೆಯವರ ನಿಸ್ವಾರ್ಥ ಬದುಕು, ಆದರ್ಶ, ದಕ್ಷತೆ, ಜನರ ಒಳಿತಿನೆಡೆಗೆ ಇರುವ ನಿಷ್ಠೆಯ ಗುಣಗಳು ಯುವ ನಾಯಕರಿಗೆ ದಾರಿದೀಪವಾಗಲಿ ಎಂದು ಹಾರೈಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರಿಯರಾಗಿದ್ದ ಭೀಮಣ್ಣ ಖಂಡ್ರೆಯವರು, ಕನ್ನಡ ಉಳಿವಿಗಾಗಿ ನಡೆಸಿದ ಹೋರಾಟ ಕಂಡು ಡಾ.ಚನ್ನಬಸವ ಪಟ್ಟದೇವರು ‘ಲೋಕನಾಯಕ’ ಎಂದು ಬಣ್ಣಿಸಿದ್ದರು. ಕಲ್ಯಾಣ ಕರ್ನಾಟಕ ಭಾಗದ ಜನರ ಪಾಲಿಗೆ ‘ಲೋಕನಾಯಕ’ರಾಗಿರುವ ಭೀಮಣ್ಣನವರ ಸಾಧನೆಗಳು ಅನೇಕ.
We use cookies to analyze website traffic and optimize your website experience. By accepting our use of cookies, your data will be aggregated with all other user data.